Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೇಲುಕೋಟೆಯಲ್ಲಿ `ಜಿದ್ದಿ`
Posted date: 03 Mon, Sep 2012 ? 08:54:57 AM

 ಓಂಶಾಂತಿ ವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಮರ್‌ಚಂದ್‌ಜೈನ್ ಹಾಗೂ ವಿಜಯ್ ಸುರಾನಾ ಅವರು ನಿರ್ಮಿಸುತ್ತಿರುವ ನೂತನ ಚಿತ್ರ ‘ಜಿದ್ದಿ ಚಿತ್ರಕ್ಕೆ ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆದಿದೆ. ಚೆಲುವನಾರಾಯಣನ ದೇಗುಲ ಹಾಗೂ ಊರಿನಲ್ಲಿ ನಿರ್ದೇಶಕ ಆರ್.ಅನಂತರಾಜು ಮಾತಿನ ಭಾಗದ ಚಿತ್ರೀಕರಣವನ್ನು ಚಿತ್ರಿಸಿಕೊಂಡಿದ್ದಾರೆ. ಪ್ರಜ್ವಲ್, ಐಶ್ವರ್ಯನಾಗ್, ಶ್ರೀನಿವಾಸಮೂರ್ತಿ, ಶಂಕರ್‌ಅಶ್ವತ್, ಜೈಶ್ರೀಕೃಷ್ಣ, ಯತಿರಾಜ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
     ಐದು ಹಾಡುಗಳಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ನಿರಂಜನ್‌ಬಾಬು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ರವಿವರ್ಮರ ಸಾಹಸ ನಿರ್ದೇಶನವಿರುವ ‘ಜಿದ್ದಿಗೆ ಪನ್ನಾಲಾಲ್ ಕೊಠಾರಿ ಅವರ ಸಹ ನಿರ್ಮಾಣವಿದೆ.
      ಪ್ರಜ್ವಲ್‌ದೇವರಾಜ್ ನಾಯರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರು ಅಂದ್ರಿತಾ ರೇ ಹಾಗೂ ಐಶ್ವರ್ಯನಾಗ್. ತಿಲಕ್, ಶ್ರೀನಿವಾಸಮೂರ್ತಿ, ಅಶೋಕ್, ಶಂಕರ್‌ಅಶ್ವತ್, ಸುಚೀಂದ್ರಪ್ರಸಾದ್, ವಿಜಯಸಾರಥಿ, ಯತಿರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.      

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೇಲುಕೋಟೆಯಲ್ಲಿ `ಜಿದ್ದಿ` - Chitratara.com
Copyright 2009 chitratara.com Reproduction is forbidden unless authorized. All rights reserved.